ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ, ಭೋಗೇಂದ್ರ ಹಾಗೂ ಮಂಜುಳ ರಮೇಶ್ ಅವರು ನಿರ್ಮಿಸಿರುವ ‘ಜೈ ಮಾರುತಿ ೮೦೦ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಎ.ಹರ್ಷ ನಿರ್ದೇಶನದ ಈ ಚಿತ್ರದ ನಾಯಕರಾಗಿ ಶರಣ್ ನಟಿಸಿದ್ದಾರೆ. ಶೃತಿ ಹರಿಹರನ್, ಶುಭಾಪೂಂಜ, ಸಾಧುಕೋಕಿಲ, ಅರುಣ್ ಸಾಗರ್, ಕುರಿ ಪ್ರತಾಪ್, ಮಧು ಗುರುಸ್ವಾಮಿ, ಭಜರಂಗಿ ಲೋಕಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸ್ವಾಮಿ ಜೆ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ ಹಾಗೂ ರವಿವರ್ಮ, ಮಾಸ್ಮಾದ ಸಾಹಸ ನಿರ್ದೇಶನ ‘ಜೈ ಮಾರುತಿ ೮೦೦ ಚಿತ್ರಕ್ಕಿದೆ.